Posts

Showing posts from January, 2011

Himalayan Blunder

Image
 author:Brigadier John P Dalvi Himalayan Blunder was an extremely controversial war memoir penned by  Brigadier John P Dalvi, who was the commander of the Indian 7th Brigade which was destroyed in the 1962 India China war. Writer was captured by PLA [People's Liberation Army of china] on 22 oct 1962. We faced defeat against China. Brigadier Dalvi gives a first-person account of the war. In book writer shows us the situation of our army, what difficulties they have faced during the war. How our soldiers resisted the china army in cold weather of Himalaya without having even good pair shoes, with limited no of bullets and grenades. He explains the condition of the Indian army politics involved in it. How our brave soldiers spent days without having proper food...list goes on .. If we read the book your eyes will be wet..!!  The book is translated to Kannada by Ravi Belagere with the same title. Read the book to get the complete view of 1962 war.

ಮೂಕಜ್ಜಿಯ ಕನಸುಗಳು

Image
 ಲೇಖಕರು:  ಡಾ||ಕೆ.ಶಿವರಾಂ ಕಾರಂತ. ಮೂಕಜ್ಜಿಯ ಕನಸುಗಳು, ಡಾ||ಕೆ.ಶಿವರಾಂ ಕಾರಂತ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತ ಕೃತಿ. ಇ ಪುಸ್ತಕದಲ್ಲಿ ಬರುವ ಮುಖ್ಯ ಪಾತ್ರ ಮೂಕಜ್ಜಿ [ಪೂರ್ಣ ಹೆಸರು ಮೂಕಾಂಬಿಕೆ ] ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಅಲ್ಪ ಸಮಯದಲ್ಲಿ ವಿಧವೆ ಪಟ್ಟ ಪಡೆದ ನಂತರ ತನ್ನ ತವರು ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಇದು ಮೂಕಜ್ಜಿ ಮತ್ತು ನಾಣಿ ನಡುವೆ ನಡೆಯುವ ಸಂಭಾಷಣೆ. ಮೂಕಜ್ಜಿ ಮತ್ತು ನಾಣಿ, ಸಂಪ್ರದಾಯ,ಆಚಾರ,ವಿಚಾರಗಳು, ಮಾನವ ಕುಲದ ವಿಕಾಸ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸುವಾಗ ಓದುಗನು ಇ ವಿಷಯಗಳ ಯೋಚಿಸುವ ಹಾಗೆ ಬರೆದಿದ್ದಾರೆ ಲೇಖಕರು. ಕೆಲವು ಮೌಡ್ಯಗಳ ಮೇಲೆ ಬೆಳಕುಚೆಲ್ಲಿದ್ದಾರೆ. ಒಮ್ಮೆ ನಾಣಿ ಜೊತೆ ಚರ್ಚಿಸುವಾಗ ಮೂಕಜ್ಜಿ 'ಕೊಲ್ಲೂರು' ಏಕೆ ಆ ಹೆಸರು ಬಂತು ಅಂತಾ ತುಂಬಾ ಚೆನ್ನಾಗಿ ವಿವರಿಸುತ್ತಾಳೆ . ಇದು ನಾನು ಓದಿದ ಮೊದಲ ಕೃತಿ. ತುಂಬಾ ಒಳ್ಳೆಯ ಪುಸ್ತಕ . ಸಮಯ ಸಿಕ್ಕಾಗ ಓದಿ.

The Immortals of Meluha ..

Image
The author describes a mythological event in very different way . The book is about how a common man Shiva become the legend, the god 'Mahadeva'. How he destroyed the evils,Civilization of Indus, Importance of river Saraswati, The war between Suryavamshi and Chandravamshi . It has characters like Sati,Nandi,Bhadra,Brahspati The novel has lots of suspense, mixed with war and love. The things evil and god are depends upon, how a person thinks. The book explains this concept nicely. Author ends the book in suspense making readers to wait for next volume of book .. When i finished reading this book, i cursed him for making me to wait for next release [The secrets of the Nagas] Do read the book when you get time. I bet you will find it hard to stop in between once you start reading. PS: These are only my views. Views may differ from person to person

ನಮ್ಮ ಆಚರಣೆಗಳು - ಸಂಜೆಯ ರೂಡಿಗಳು

         ಮೊನ್ನೆ ಶನಿವಾರ ಸಂಜೆ ನನ್ನ ಒಬ್ಬ ಗೆಳೆಯ, ಲೇ ಸೂಜಿ ತೊಗೋಬೇಕು ಬಾ ಅಂಗಡಿಗೆ ಹೋಗೋಣ ಅಂದಾ . ನನ್ನ ಜೋತೆ ಇದ್ದ ಇನ್ನೊಬ್ಬ ಲೋ ಸಂಜೆ ಹೊತ್ತು ಸೂಜೆ ಮಾರಲ್ಲ ಅಂದ .ಲೇ ನೋಡೋಣ ನಡಿಲೆ ಅಂತಾ ಒತ್ತಾಯ ಮಾಡಿ ಅವನನ್ನ ಕರ್ಕೊಂಡು ಹೋದಾ. ಸ್ವಲ್ಪ ಹೊತ್ತಿನ ನಂತರ ಇಬ್ಬರು market ಇಂದ ತರಕಾರಿ, ಅದರಲ್ಲೂ ಒಳ್ಳೆ ಗಜ್ಜರಿ ಏನೂ ತೊಗೊಂಡು ಬಂದಿದ್ದರು, ಆದ್ರೆ ಸೂಜಿ ಮಾತ್ರ ಸಿಕ್ಕಿರಲಿಲ್ಲ, ಅಲ್ಲ ಅಂಗಡಿಯವನು ಇವರಿಗೆ ಕೊಟ್ಟಿರಲಿಲ್ಲ .           ಇದು ನಾನು ಹೇಳ್ತಿರೋದು hi-tech city  ನಮ್ಮ ಬೆಂಗಳೂರಲ್ಲಿ . ನನಗೆ ನಂಬೋಕೆ ಆಗ್ಲಿಲ್ಲ. ಇಗಲು ಇದನ್ನ ಪಾಲಿಸ್ತಾರ?  ಅದರಲ್ಲೂ ಇಲ್ಲಿ ಬೆಂಗಳೂರಲ್ಲಿ ..??          ನಾವು ಎಷ್ಟೇ ಮುಂದುವರೆದರು ಕೆಲವೊಂದು ಸಂಸ್ಕಾರಗಳನ್ನ ಇನ್ನು ಮುಂದುವರೆಸಿಕೊಂಡು ಬಂದಿದಿವಿ ...ಒಂದು ರೀತಿಲಿ ಇದು ಒಳ್ಳೇದು... ಚಿಕ್ಕವನಿದ್ದಾಗ ಅಮ್ಮನು ಅಂತಿದ್ಲು ಸಂಜೆ ಹೊತ್ತು ಸೂಜೆ, ಉಪ್ಪು ಎಣ್ಣೆ ಎನನ್ನು ಮನೆ ಇಂದ ಹೊರಗೆ ತೊಗೊಂಡು ಹೋಗಬಾರದು ಅಂತಾ .  ನಮ್ಮ ಊರಿನ ಕಡೆ, ತುರ್ತಾಗಿ ಬೇಕಿರುವ ವಸ್ತುಗಳು ಮನೆಯಲ್ಲಿ ಇರದಿದ್ರೆ ಪಕ್ಕದಮನೆಯವರ ಹತ್ರ ಎರವಲು [ನಾವು ಕಡ ಅಂತಾ ಅಂತಿವಿ ] ತೆಗೆದುಕೊಳ್ಳುವದು ರೂಡಿಯಲ್ಲಿದೆ. ಕೆಲವೊಮ್ಮೆ ಪಕ್ಕದಮನೆಯವರು ಯಾರಾದ್ರೂ ಸಂಜೆ ಸೂಜಿ ಬೇಕು ಅಂತಾ ಬಂದಾಗ ಅಮ್ಮ, ನಾವು ಸಂಜೆ ಹೊತ್ತು ಸೂಜಿ ಕೊಡಲ್ಲ .. ಸ್ವಲ್ಪ ಮುಂಚೆನೇ ಬರೋದಲ್ವ ಅಂತಾ ಅಂದ್ದಿದ್ದು ನನಗೆ ಇನ್ನೂನೆನಪಿ

ನಮ್ಮ ಆಚರಣೆಗಳು-ಮಕರ ಸಂಕ್ರಾಂತಿ

Image
           ನಮ್ಮ ಸಂಪ್ರದಾಯ ಸಂಸ್ಕೃತಿ ಎಲ್ಲಾ ಹಾಳಾಗಿಹೊಯ್ತು ... ಈಗಿನ ಹುಡುಗರಿಗೆ / ಹುಡುಗಿರಿಗೆ ಒಂಚೂರು ನಮ್ಮ ಆಚರಣೆ ಬಗ್ಗೆ ಆಸಕ್ತಿನೇ ಇಲ್ಲ ಅಂತ ಹಿರಿಯರು ಬೈಯೋದನ್ನಾ ಇ ಕಿವಿ ಇಂದ ಕೇಳಿ ಆ ಕಿವಿ ಇಂದ ಬಿಟ್ಟು ಬಿಟ್ಟಿರ್ತಿವಿ.         ಆದರೆ ನಮ್ಮಲ್ಲಿ ಎಷ್ಟೋ ಜನಕ್ಕೆ ಇ ಆಚರಣೆಗಳ ವಿಶಿಷ್ಟತೆ, ಮಹತ್ವ ಗೊತ್ತಿಲ್ಲ. ಕೆಲವೊಂದು ಆಚರಣೆಗಳಿಗೆ ವೈಜ್ಞಾನಿಕ ಮಹತ್ವನೂ ಇದೆ .           ಇಂತಹ ಸಂಪ್ರದಾಯಗಳನ್ನ ಕೇವಲ ಆಚರಣೆಗಳಂತೆ ನೋಡದೆ, ವೈಜ್ಞಾನಿಕವಾಗಿ ನೋಡಿದರೆ ಅವುಗಳ ಮಹತ್ವ ಇನ್ನು ಹೆಚ್ಚುತ್ತದೆ          ನನಗೆ ಗೊತ್ತಿರುವಷ್ಟು ವಿಷಯವನ್ನ ಇ ಲೇಖನಗಳ ಮೂಲಖ ಹಂಚುವ ಒಂದು ಸಣ್ಣ ಪ್ರಯತ್ನ . ನಿಮ್ಮ ಅನಿಸಿಕೆಗಳು, ನಿಮ್ಮ ವಿಚಾರಗಳಿಗೆ ಸದಾ ಸ್ವಾಗತ :) ಮಕರ ಸಂಕ್ರಾಂತಿಯ ಆಚರಣೆಗಳು:          ಇ ಹಬ್ಬ ಚಳಿಗಾಲದ ಕೂನೆ ಭಾಗ ಮತ್ತು ಬೇಸಿಗೆಯ ಆರಂಭವನ್ನ ಸೂಚಿಸುತ್ತದೆ. ಸೂರ್ಯ ತನ್ನ ಪತವನ್ನ ಮಕರ ರಾಶಿಗೆ ಬದಲಿಸುತ್ತಾನೆ.          ಸಂಕ್ರಾಂತಿಯಂದು ಜನ ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಳ್ಳುತ್ತಾರೆ. ಇ ಎಳ್ಳು ಬೆಲ್ಲ, ಕಬ್ಬು ತಿನ್ನುವದರಿಂದ ನಮ್ಮ ದೇಹದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಕೊರೆಯುವ ಚಳಿ ಇಂದ ಕಳೆದು ಹೊದ ತೇವಾಂಶವನ್ನುಹೆಚ್ಚಿಸಲಿಕ್ಕೆ ಅಂತಾನೇ ನಮ್ಮ ಹಿರಿಯರು ಇ ಸಂಪ್ರದಾಯವನ್ನ ಆರಂಬಿಸಿದ್ದು ಅಂತಾ ಅನ್ನಸತ್ತೆ.          ಇನ್ನು ರೈತರಿಗೆ ಇದು ಸುಗ್ಗಿಯ ಕಾಲ. ಬೆಳೆದ ಬೆಳೆಯನ್ನ ರಾಶಿಮ

ಹಳೇ ನೆನಪುಗಳು:ಹೊಸ ವರ್ಷ

ಅಪ್ಪಾ ನಂಗೆ 10 ರೂಪಾಯಿ ಬೇಕು ... ಯಾಕೆ ಅಂತಾ ಕೇಳಿದ್ರು. ಆಗಿನ್ನೂ ನಾನು ನಾಲ್ಕನೇ ತರಗತಿಲಿ ಓದ್ತಿದ್ದೆ . ನಾಳೆ ಹೊಸಾ ವರ್ಷ, Sir ಗೆ greetings card ಮಾಡಿ ಕೊಡ್ತಿದಿವಿ ಅದಕ್ಕೆ ಅಂತಾ ಅಂದೆ. ಆಯ್ತು ತೊಗೋ ಅಂತಾ ಜೇಬಿಂದ 10 ರೂಪಾಯಿ ತೆಗೆದುಕೊಟ್ರು . ಏನು ಮಾಡ್ತೀರಿ ಅಂತಾ ಕೇಳಿದ್ರು .. ದಪ್ಪಾ ಪೇಪರ್ ನಲ್ಲಿ sketch pen ಇಂದ "ಹೊಸಾ ವರ್ಷದ ಹಾರ್ದಿಕ ಶುಭಾಶಯಗಳು 1995 " ಅಂತಾ ಬರೀತೀನಿ ಅಂದೆ.ಆಯ್ತು ದುಡ್ಡು ಜೋಪಾನ ಕಳ್ಕೊಬೇಡ, ಶಾಲೆ ಇಂದ ಬರ್ತಾ paper  ತೊಗೊಂಡ್ ಬಾ ಅಂದ್ರು  ಅದರ ಹಿಂದಿನ ದಿನ ಗೆಳೆಯರೆಲ್ಲ ಸೇರಿ greeting card ಕೊಡೋನಾ ಅಂತಾ ಯೋಚಿಸಿದ್ವಿ . ಸರಿ ಅಂತಾ ನಾನು ಶಾಲೆಗೆ ಹೋದೆ. ತುಂಬಾ ಹತ್ತಿರದ ಗೆಳೆಯರಿಗೆ ಮಾತ್ರ, ಲೇ ನೋಡು ಅಪ್ಪ 10 ಕೊಟ್ರು ಅಂತಾ ತೋರ್ಸಿ,ನೀನು ಏನ್ ಬರಿತಿಯ, ಹೆಂಗೆ ಬರಿತಿಯ, ಯಾವ ಯಾವ ಬಣ್ಣದ ಪೆನ್ use ಮಾಡ್ತಿಯಾ, ಅದು ಇದು ಅಂತಾ  ಕೇಳಿ ಸಂಜೆ ವಾಪಸ್ ಮನೆಗೆ ಬರುವಾಗ paper ಮತ್ತೆ sketch pen ತೊಗೊಂಡು ಹೋದೆ. ಊಟಕ್ಕಿಂತ ಮುಂಚೆನೇ ನನಗೆ ತೋಚಿದ ರೀತಿಲಿ ಶುಭಾಶಯ ಸಂದೇಶ ಬರೆದು ಬಣ್ಣ ತುಂಬಿದೆ.   ಮಲಗಬೇಕಿದ್ರೆ, ಬೇರೆ ಗೆಳೆಯರು ಯಾವತರಾ ಬರದಿರಬಹುದು ಅನ್ನೋ ಕುತೂಹಲ !!!! ಬೆಳಿಗ್ಗೆ ಶಾಲೆಲಿ ಎಲ್ಲರೂ ತಮ್ಮ card ಅನ್ನ ತೋರ್ಸಿ ಲೇ ನೋಡು ನಾನು ಎಷ್ಟು ಚೆನ್ನಾಗಿ ಬರದಿದಿನಿ ಅಂತಾ ಹೇಳಿದ್ದೆ ಹೇಳಿದ್ದು. ಒಬ್ಬರೆ ಹೋಗಿ sir ಗೆ card ಕೊಟ್ಟು ಶುಭಾಶ